ಮಾನವೀಯತೆ

ಮಾನವೀಯತೆ,
ಏನಾಗಿದೆ ನಿನಗೆ?
ಹೀಗೇಕೆ ನಡುಬೀದಿಯಲಿ
ಮೌನವಾಗಿ ಮಲಗಿರುವೆ,

ಸತ್ಯಕ್ಕೆ ಜಯವೆಂಬ
ನಿನ್ನ ವಾಕ್ಯ ಏನಾಯಿತಿಂದು?
ನಿನ್ನ ಸಂಗಾತಿಗಳೆಲ್ಲ ಇಂದು
ಯಾಕೆ ಪಕ್ಷಾಂತರ ಮಾಡಿದರು?

ಈ ಕೊರಗಿನಲ್ಲಿಯೇ ನೀನು
ಸ್ವರಗಿ ಹೋಗುತ್ತಲಿರುವೆಯಾ?
ನೆಲದಲಿ ಹುಗಿದು ಹೋಗಿ
ಆವಶೇಷವಾಗುತ್ತಲಿರುವೆಯಾ?

ಹೀಗೆ ಬೀದಿಯಲ್ಲಿ ಬಿದ್ದು
ಒದ್ದಾಡಿ ಕೊನೆಯ ಬಿಕ್ಕು
ಹತ್ತಿದಾಗಲೂ ಜನ ನಿನಗೆ
ಕಲ್ಲುಹೊಡೆದು ಘಾಸಿಗೊಳಿಸಿ
ಗಾಯ ಮಾಡಿದರು.

ನಿನ್ನ ದೇಹದಿಂದ ಹರಿದು
ಸೇರಿದ ರಕ್ತದ ಕೆಂಪು
ಬಡಿದೆಬ್ಬಿಸಿತು ನನ್ನ
ಮಲಗಿರುವ ಆತ್ಮವ
ಸಿಡಿದೇಳುವಂತೆ ಮಾಡಿತು.

ಹಾದಿ ಬೀದಿಯಲಿ ಹೀಗೆ
ನಿನಗೆ ಅವಮಾನಿಸುತ್ತಿರುವಾಗ
ನಾನು ನಿನ್ನ ಹತ್ತಿರ ಬಂದು
ಎಬ್ಬಿಸಿ ಮಾತನಾಡಿಸಿದೆ.

ಇದನ್ನು ಕಂಡೂ ಕಾಣದಂತೆ
ಸತ್ಯ ಮಾನವೀಯತೆಗಳ ಬಗ್ಗೆ
ಭಾಷಣ ಮಾಡುವ ಮಾಸ್ತರರು
ಮೂಗು ಮುಚ್ಚಿಕೊಂಡು
ರಸ್ತೆಯಂಚಿನಲಿ ಮುಖ
ತಿರುವಿಕೊಂಡು ಹೋಗುತ್ತಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಬು ಮುಳ್ಳಿನೊಳಿಲ್ಲವೇ ಮಾಧುರ್‍ಯ?
Next post ಹೆಣ್ಣು

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys